Friday 11 November 2011

ಅಸೆ - ದುರಾಸೆ


ಮಿನುಗು ತಾರೆ ಪಡೆಯಲೇಕೆ ಹಂಬಲ 
ಬದುಕೇ ಹೊಳಪಿಲ್ಲದ ಹರಳಾಗಿರುವಾಗ..?
ಮಳೆ ಸುರಿಸುವ ಮುಗಿಲಾಗಲೇಕೆ ಹಂಬಲ
ಮನಸ್ಸು ಬರಡು ಮರುಭೂಮಿಯಾಗಿರುವಾಗ..?



ನದಿಯು ತೊರೆಯ ಸ್ನೇಹ ಮರೆತಿರುವಾಗ
ನದಿಗೆ ಕಡಲಾಗುವ ದುರಾಸೆ...!
ಸೌಗಂಧ ಹೂವ ಋಣ ಮರೆತಿರುವಾಗ
ಸೌಗಂಧಕ್ಕೆ ತನ್ನಿಂದ ತಾನೇ ಹರಡುವಾಸೆ..!

ದೇವರ ಪರಮ ಭಕ್ತ ಎನಿಸಿಕೊಳ್ಳುವಾಸೆ
ಭಯ ಭಕ್ತಿ ಇಲ್ಲದ ನಾ-ಆಸ್ತಿಕನಿಗೆ...!
ಜನಪರ ನಾಯಕನಾಗುವಾಸೆ
ನಿಷ್ಠೆ ಕಾಳಜಿ ಇಲ್ಲದ ಮನುಷ್ಯ ಹುಳುವಿಗೆ...!

ತನ್ನ ಒಲವು ತೊಡಕುಗಳ ಅರಿವಿಲ್ಲದವನಿಗೆ
ಇತರರ ದುಮ್ಮಾನಗಳ ನೀಗಿಸುವಾಸೆ...!
ನಾನು ನಾನಲ್ಲ ಎಂದು ಬದುಕಿದ್ದರೂ
ಸಂಪತ್ತು ನನ್ನದಾಗಿಸುವಾಸೆ...! 

- ವಿಘ್ನೇಶ್ ತೆಕ್ಕಾರ್

No comments:

Post a Comment