Tuesday 8 November 2011

ಮನುಷ್ಯತ್ವ


ಭಿಕ್ಷುಕರ ಪುಟ್ಟ ಹುಡುಗನೊಬ್ಬ ಬೀದಿಬದಿಯಲ್ಲಿ ಏನೋ ಹುಡುಕುತ್ತಿದ್ದ.
ಕೆಲ ಹೊತ್ತಿನಿಂದ ಗಮನಿಸುತ್ತಿದ್ದ ರಿಕ್ಷಾ ಚಾಲಕನೊಬ್ಬ ಹುಡುಗನ ಬಳಿ ಬಂದು, ಏನೋ ಪುಟ್ಟ ಏನ್ ಕಳೆದುಕೊಂಡಿದ್ದಿಯಾ...? ಎಂದು ಕೇಳತೊಡಗಿದ. 
ಪ್ರತಿಯಾಗಿ ನಾನು ಮನುಷ್ಯತ್ವವನ್ನು ಹುಡುಕುತ್ತಿದ್ದೇನೆ ಎಂಬುದಾಗಿ ಉತ್ತರಿಸಿದ ಪುಟ್ಟ. 
ಲೇ ಹುಚ್ಚು ಹಿಡಿದಿದಿಯೇನೋ ನಿಂಗೆ, ಮನುಷ್ಯತ್ವ ಎಲ್ಲಾದ್ರೂ ಬೀದಿ ಬದಿ ಸಿಗೊಕ್ಕೆ ಏನು ಕಿತ್ತೋಗಿರೋ ಚಪ್ಲಿನಾ..? ಮನುಷ್ಯತ್ವ ಮನುಷ್ಯರಲ್ಲಿ ಇರೊತ್ತೆ ಕಣೋ ಎಂದ ರಿಕ್ಷಾ ಚಾಲಕ. 
ಹೌದಾ! ಮತ್ತೆ ಎರಡು ದಿನದ ಹಿಂದೆ ನನ್ನ ಅಮ್ಮಂಗೆ ಖಾಯಿಲೆ ಜೋರಾಗಿದೆ, ಆಸ್ಪತ್ರೆಗೆ ಕರ್ಕೊಂಡು ಹೋಗ್ಬೇಕು ಅಂದಾಗ ನನ್ನಲ್ಲಿ ದುಡ್ಡು ಇಲಾಂತ ನೀನು ಬರ್ಲಿಲ್ಲ. ಅಮ್ಮ ತೀರ್ ಕೊಂಡಳು. ನೀನು ಮನುಷ್ಯ ತಾನೇ..? ಎಂದು ಪ್ರಶ್ನಿಸಿದಾಗ ಸುಟ್ಟ ಬದನೇಕಾಯಿ ಹಂಗಿತ್ತು ರಿಕ್ಷಾ ಚಾಲಕನ ಮುಖ.

-ವಿಘ್ನೇಶ್ ತೆಕ್ಕಾರ್

No comments:

Post a Comment